Friday , September 20 2024
Breaking News
Home / Breaking News / ತಾವರಗೇರಾ: ರೈತರಿಂದ ಕೆಇಬಿ ಗೆ ಮುತ್ತಿಗೆ

ತಾವರಗೇರಾ: ರೈತರಿಂದ ಕೆಇಬಿ ಗೆ ಮುತ್ತಿಗೆ

 

ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಸಂಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪುರ, ಗಂಗನಾಳ, ಕನ್ನಾಳ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆಗ್ರಹಿಸಿ ಆ ಭಾಗದ ರೈತರು ಬುಧುವಾರ ಇಲ್ಲಿಯ ಕೆ ಇ ಬಿ ಸ್ಟೇಷನ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಂತರ ಪುರ ಗ್ರಾಮದ ಮುಖಂಡ ರಮೇಶ ಗಿರಣಿ ಮಾತನಾಡಿ ಸಂಗನಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೆ ಇ ಬಿ ಯವರ ನಿರ್ಲಕ್ಷ್ಯದಿಂದಾಗಿ ಕುಡಿಯುವ ನೀರು ಸೇರಿದಂತೆ ರೈತರ ಬೆಳೆಗಳು ಹಾಳಾಗುತ್ತಿದ್ದು, ಈ ಬಗ್ಗೆ ಕೆ ಇ ಬಿ ಯವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬ್ಬಂದಿ ವಾರದೊಳಗಾಗಿ ಸರಿಪಡಿಸುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆದುಕೊಂಡರು.

ಈ ಸಂಧರ್ಬದಲ್ಲಿ ರೈತರು ಹಾಗೂ ಪ್ರಭಾರಿ ವಿಭಾಗಧಿಕಾರಿ ತಾಜುದ್ದೀನ್ ಹಾಗೂ ರೈತರ ಮದ್ದೆ ಕೆಲ ಹೊತ್ತು ವಾಗ್ವಾದ ನಡೆಯಿತು.
ಸಂಗನಾಳ ಗ್ರಾಮದ ಸಂಗಪ್ಪ ಮೇರನಾಳ, ದೇವರಾಜ ಬಡಿಗೇರ, ಗಂಗನಾಳದ ಸಗರಪ್ಪ, ನಿರುಪಾದಿ, ಕನ್ನಾಳ ಗ್ರಾಮದ ಗಂಗಣ್ಣ, ಸಣ್ಣ ನಾಗಪ್ಪ, ಪುರ ಗ್ರಾಮದ ಸೋಮಣ್ಣ, ಶಿವಪ್ಪ, ದೊಡ್ಡಪ್ಪ ಸೇರಿದಂತೆ ರೈತರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!