Thursday , September 19 2024
Breaking News
Home / Breaking News / ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಅವಿರೋಧ ಆಯ್ಕೆ

ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಅವಿರೋಧ ಆಯ್ಕೆ

 

ಎನ್ ಶಾಮೀದ್ ತಾವರಗೇರಾ

ತಾವರಗೇರಾ; ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ 13 ನಿರ್ದೇಶಕರು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮದ ಅಡಿಯಲ್ಲಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿದ್ಯಾ ಎಚ್ ಕೋಲ್ಕರ್ ತಿಳಿಸಿದ್ದಾರೆ.

ಆಯ್ಕೆಯಾದ ನೂತನ ನಿರ್ದೇಶಕರ ವಿವರ:-

ಸಾಮಾನ್ಯ ಕ್ಷೇತ್ರದಿಂದ ಅನಿತಾ ವಿ ತಾಳಿಕೋಟಿ, ಆದಪ್ಪ ನಾಲತವಾಡ, ಪಂಪಣ್ಣ ಚಿಟ್ಟಿ, ಮಲ್ಲನಗೌಡ ಓಲಿ, ರುಕುಂ ಸಿಂಗ್ ಬಪ್ಪರಗಿ, ಶೇಖರಪ್ಪ ನಾಲತವಾಡ, ಸಂತೋಷ ಕುಮಾರ ದರೋಜಿ ಆಯ್ಕೆಯಾಗಿದ್ದಾರೆ. ಶರಣಪ್ಪ ಐಲಿ ಹಿಂದುಳಿದ ವರ್ಗ (ಅ) ಹಾಗೂ ಬಸನಗೌಡ ಪೊಲೀಸ್ ಪಾಟೀಲ್‌, ಹಿಂದುಳಿದ ವರ್ಗ (ಬ) ನಾಗೇಂದ್ರ ಹುನಗುಂದ (ಪ.ಜಾತಿ), ಈಶಮ್ಮ ನಾಲತವಾಡ (ಪ.ಪಂಗಡ) ಆಯ್ಕೆಯಾಗಿದ್ದಾರೆ. ಮಹಿಳಾ ಕೊಟಾದಡಿ ಕವಿತಾ ಗುಡಸಲಿ ಹಾಗೂ ಶೋಭಾ ಶಿರವಾರ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಚುನಾವಣೆ ನಡೆದ ಸಂದರ್ಭದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕ ಆದನಗೌಡ ಪಾಟೀಲ, ವೆಂಕಟೇಶ ಗುಡಸಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!