Friday , September 20 2024
Breaking News
Home / Breaking News (page 43)

Breaking News

ವಿ.ಪ ಚುನಾವಣೆ : ಮತ ಚಲಾಯಿಸಿದ ಶಾಸಕ ಡಿ ಎಸ್ ಹೂಲಗೇರಿ

ವರದಿ : ನಾಗರಾಜ್ ಎಸ್ ಮಡಿವಾಳರ  ರಾಯಚೂರು – ಕೊಪ್ಪಳ ಜಿಲ್ಲಾ  ವಿಧಾನ ಪರಿಷತ್  ಸ್ಥಾನದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಲಿಂಗಸಗೂರು  ಶಾಸಕ ಡಿ ಎಸ್ ಹೂಲಗೇರಿ  ಪಟ್ಟಣದ ಪುರಸಭೆಯ ಮತಗಟ್ಟೆಯಲ್ಲಿ ಬೆಳಗ್ಗೆ 11.30 ಗಂಟೆಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.ನಂತರ  ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶರಣಗೌಡ ಬಯ್ಯಪೂರ ಅವರು ಹೆಚ್ಚು ಮತಗಳಿಂದ ಗೆಲವು ಸಾದಿಸಲಿದ್ದಾರೆ ಎಂದರು ಈ ಸಂದರ್ಭದಲ್ಲಿ …

Read More »

ಓಮಿಕ್ರನ್ ಜಾಗೃತಿ ಮೂಡಿಸಿದ ಬಾಲಕಿ ಭೂಮಿಕಾ…

  ನಾಗರಾಜ್ ಎಸ್ ಮಡಿವಾಳರ್ ಕುರುಗೋಡು : ಪಟ್ಟಣದ ಶ್ರೀ ನಂದಿ ರೆಸಿಡೆನ್ಸಿಯೇಲ್ ಪಬ್ಲಿಕ್ ಶಾಲೆಯ ಬಾಲಕಿ  ಕರೋನ 3ನೇ ಅಲೇಯ ಬಗ್ಗೆ ಚಿತ್ರಕಲೆಯ ಮೂಲಕ  ಜಾಗೃತಿ ಮೂಡಿಸಿದ್ದಾಳೆ.  7ನೇ ತರಗತಿ ಓದುತ್ತಿರುವ  ಭೂಮಿಕಾ ಎಂ ಎಂಬುವ ಬಾಲಕಿ  ತನ್ನ ಚಿತ್ರ ಕಲೆಯ ಮೂಲಕ ಜನರಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಕರೋನ ಬರದಂತೆ ತಡೆಯೋಣ ಎಂದು ಜಾಗೃತಿ ಮೂಡಿಸಿ, ಸರಕಾರ ವಿಧಿಸಿರುವ ಕರೋನ ನಿಯಮಗಳ ಪಾಲಿಸಿ ಎಂದು ಚಿತ್ರದಲ್ಲಿ …

Read More »

ಜಮಖಂಡಿ: ಶರಣ ಶ್ರೀ ಡಾ. ಈಶ್ವರ್ ಮಂಟೂರ ಲಿಂಗೈಕ್ಯ..!

ವರದಿ ಎನ್ ಶಾಮೀದ್ ತಾವರಗೇರಾ ಜಮಖಂಡಿ: ಖ್ಯಾತ ಪ್ರವಚನ ಕಾರರು ಹಾಗೂ ಹೂನೂರ ಮಧುರಖಂಡಿಯ ಬಸವ ಜ್ಞಾನ ಗುರುಕುಲ ಪೀಠದ ಡಾ.ಶರಣ ಶ್ರೀ ಈಶ್ವರ ಮಂಟೂರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು, ರಾಜ್ಯದ ಅಪಾರ ಭಕ್ತಿ ವೃಂದದವರು ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಕಂಡಿಯ ಹೂನೂರ ಮಠದ, ಮಠಾಧಿಪತಿಗಳಾಗಿದ್ದ ಅವರು ಪ್ರವಚನ ದಿಂದ ನಾಡಿನ ಸಮಸ್ತ ಜನರ ಜನಾನುರಾಗಿಯಾಗಿ ಇದ್ದರು.

Read More »

ಮುದಗಲ್ ಅರ್ಬನ್ ಬ್ಯಾಂಕ್ ಮುಖ್ಯವ್ಯವಸ್ಥಾಪಕ ಹನುಮಂತಪ್ಪ ಅಂಗಡಿ ನಿಧನ ….

  ಮುದಗಲ್ : ಪಟ್ಟಣದ ಮುದಗಲ್ ಅರ್ಬನ್ ಬ್ಯಾಂಕಿನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹನುಮಂತಪ್ಪ ಅಂಗಡಿ ರವರು ಸೋಮವಾರ ದ್ವಿಚಕ್ರ ವಾಹನ ಚಲಾಯಿಸುತ್ತಿರುವಾಗ ರಸ್ತೆ ಅಪಘಾತವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದು, ತಾಯಿ, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ.ಇವರ ಅಗಲಿಕೆಗೆ ಬ್ಯಾಂಕಿನ ಸಿಬ್ಬಂದಿಗಳು ಕಂಬನಿ ಮಿಡಿದರು.  

Read More »

ತಾವರಗೇರಾ: ನಾಗರಿಕ ಸಮಿತಿಯ ಶಾಕ್ ಗೆ, ಕಾಂಗ್ರೆಸ್, ಬಿಜೆಪಿ ಸರಣಿ ಸಭೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣ ಪಂಚಾಯತ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಿರಸ್ಕರಿಸಿ ನಾಗರಿಕರ ಸಮಿತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನದಿಂದಾಗಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರುಗಳು ಸರಣಿ ಸಭೆಗಳನ್ನು ನಡೆಸಲು ಮುಂದಾಗಿವೆ. ಕಾಂಗ್ರೆಸ್: ಸೋಮವಾರ ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಮೇಗಾ ಫಂಕ್ಷನ್ ಹಾಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ ಜರುಗಲಿದೆ ಎಂದು ತಾಲೂಕ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡಾ.ಶಾಮೀದ್ ದೋಟಿಹಾಳ …

Read More »

ತಾವರಗೇರಾ ಪಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳನ್ನು ಧಿಕ್ಕರಿಸಿ, ಸಮೀತಿಯಿಂದ ಸ್ಪರ್ಧೆಗೆ ನಿರ್ಧಾರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾನ ಮನಸ್ಕರ ಸಭೆ ಸೇರಿ ಬರುವ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳನ್ನು ತಿರಸ್ಕರಿಸಿ ತಾವರಗೇರಾ ನಾಗರಿಕರ ಸಮೀತಿ ರಚಿಸಿ, ಪಟ್ಟಣದ ಎಲ್ಲಾ ವಾರ್ಡಗಳಲ್ಲೂ ಸಮಿತಿ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು. ಪಟ್ಟಣದ ರಾಜಕೀಯ ದೃವೀಕರಣಕ್ಕೆ ಕಾರಣವಾಗಿರುವುದು ಪ್ರಮುಖ ಪಕ್ಷಗಳ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿರುವುದಂತು ಸತ್ಯ..! ಪಟ್ಟಣದ ಅಭಿವೃದ್ಧಿ ಹಿತದೃಷ್ಟಿಯಿಂದ ಸಮಿತಿ ರಚನೆ ಮಾಡಲಾಗಿದ್ದು ಸೂಕ್ತ …

Read More »

ಮುದಗಲ್ : ಚಾಕುವಿನಿಂದ ಇರಿದು ಕೊಲೆಗೆ ಯತ್ನ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸಮೀಪದ ತೊಡಕಿ ಗ್ರಾಮದಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ನಡೆದ ಜಗಳದಲ್ಲಿ ಬಸವರಾಜ ಮತ್ತು ವೀರೇಶ ಇಬ್ಬರಿಗೂ ಚಾಕುವಿನಿಂದ ಇರಿದಿದ್ದು. ಗಾಯಳುಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೀರೇಶ್ ಎನ್ನುವವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಘಟನಾಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.  

Read More »

ಕುಷ್ಟಗಿ: ಗ್ರಾಮೀಣ ಭಾಗದ ರೈತರನ್ನು ವಂಚಿಸುತ್ತಿದ್ದ ಕಳ್ಳನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಅನಕ್ಷರಸ್ಥರು ಹಾಗೂ ಗ್ರಾಮೀಣ ಪ್ರದೇಶದ ಜನರನ್ನೆ ಗುರಿಯಾಗಿಸಿಕೊಂಡು ಎಟಿಎಮ್ ಮಶಿನ್ ನಿಂದ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಹಣವನ್ನು ದೋಚುತ್ತಿದ್ದ ಖತರ್ನಾಕ ಕಳ್ಳನನ್ನು ಕುಷ್ಟಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿಯನ್ನು ಕಂದಕೂರ ಗ್ರಾಮದ ಚಾಲಕ ಮಂಜುನಾಥ ಸಂಗನಾಳ ಉಪ್ಪಾರ ನನ್ನು ಬಂಧಿಸಲಾಗಿದ್ದು ಆತನನ್ನು ವಿಚಾರಣೆ ಮಾಡಲಾಗಿ ಸುಮಾರು ಒಂದು ವರ್ಷದಿಂದ ಎಟಿಎಮ್ ಗೆ ಬರುವ ರೈತರು ಮತ್ತು ಅನಕ್ಷರಸ್ಥ ರನ್ನು ಗುರಿಯಾಗಿಸಿಕೊಂಡು …

Read More »

ರಾಯಚೂರು : ಕಿಚ್ಚ ಸುದೀಪ್ ಹೆಸರಿನಲ್ಲಿ ದೇವಾಲಯ

ವರದಿ : ನಾಗರಾಜ್ ಎಸ್ ಮಡಿವಾಳರ್  ರಾಯಚೂರು : ಜಿಲ್ಲೆಯ ಕುರಕುಂದ ಗ್ರಾಮದಲ್ಲಿ ತಮ್ಮ ನೆಚ್ಚಿನ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹೆಸರಿನಲ್ಲಿ ಅಭಿಮಾನಿಗಳು ದೇವಾಲಯ ನಿರ್ಮಿಸಲಿದ್ದಾರೆ. ಈಗಾಗಲೇ ಗ್ರಾಮದಲ್ಲಿ ನಟನ ಪುತ್ಥಳಿ ಪ್ರತಿಷ್ಟಾಪನೆ ಕೂಡಾ ಮಾಡಲಾಗಿದೆ..! ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮವೇ ವಿಶಿಷ್ಟವಾಗಿರುವಂತದ್ದು. ಇಲ್ಲಿನವರೇ, ತಮಗಿಷ್ಟವಾಗಿರುವ ನೆಚ್ಚಿನ ನಟ ಸುದೀಪ್ ಅವರನ್ನು ಸಾಕ್ಷಾತ್ ದೇವರ ರೂಪದಲ್ಲಿ ಕಾಣುತ್ತಿರುವುದು. ಕೇವಲ ದೇವರ ರೂಪದಲ್ಲಿ ಕಂಡರೆ ಸಾಲದು, …

Read More »

ಖ್ಯಾತ ಜವಳಿ ವ್ಯಾಪಾರಸ್ಥ ಮಲ್ಲಪ್ಪ ಜೀಡಿ ಇನ್ನಿಲ್ಲ…

ಮುದುಗಲ್: ಪಟ್ಟಣದ ನಿವಾಸಿಗಳಾದ ಖ್ಯಾತ ಜವಳಿ ವ್ಯಾಪಾರಸ್ಥರಾದ  ಮಲ್ಲಪ್ಪ ಜೀಡಿ(80) ಬುಧವಾರ ಮೃತಪಟ್ಟಿದ್ದಾರೆ. ಮೃತರಿಗೆ ಮೂವರು  ಗಂಡು ಮಕ್ಕಳು, ಮೂವರು  ಹೆಣ್ಣುಮಕ್ಕಳು ಇದ್ದು  7 ಮಮ್ಮಕ್ಕಳು ಇದ್ದು  ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ 5.30ಕ್ಕೆ  ಗಂಟೆಗೆ ತಾವರಗೇರಾ ರಸ್ತೆಯ  ಸ್ವಂತ ಹೊಲದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Read More »
error: Content is protected !!