Friday , September 20 2024
Breaking News
Home / Breaking News (page 24)

Breaking News

ಮುದಗಲ್ : ಮುಖ್ಯಧಿಕಾರಿಯಾಗಿ ಪರಶುರಾಮ್ ನಾಯಕ್ ಅಧಿಕಾರ ಸ್ವೀಕಾರ

  ನಾಗರಾಜ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆ ಮುಖ್ಯಧಿಕಾರಿಯಾಗಿ ಪರಶುರಾಮ ನಾಯಕ್ ಅಧಿಕಾರ ಸ್ವೀಕಾರ ಮಾಡಿದರು.  ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ರವರ ಜಾಗಕ್ಕೆ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರವರು ಪರಶುರಾಮ್ ನಾಯಕ್ ರವರಿಗೆ ಹೂ ಮಾಲೆ ಹಾಕಿ ಸ್ವಾಗತಿಸುವ …

Read More »

ತಾವರಗೇರಾ: ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಮೀದ್ ಅಲಿ ವೃತ್ತದಲ್ಲಿ ಕನ್ನಡ ಸೇನೆಯ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಯಿತು, ಹಾಗೂ ಸ್ಥಳೀಯ ಕನಕದಾಸ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ವನ್ನು ಸಂಭ್ರಮದಿಂದ ಆಚರಿಸಲಾಯಿತು. …

Read More »

ತಾವರಗೇರಾ:- ಮನೆ ಬೀಗ ಮುರಿದು, ಬಂಗಾರ ಕಳ್ಳತನ..!

  ವರದಿ‌ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ವಿಶ್ವೇಶ್ವರಯ್ಯ ನಗರ ಮನೆಯೊಂದರಲ್ಲಿ ಕಳ್ಳರು ಮನೆಯ ಬೀಗ ಮುರಿದು ಬಂಗಾರ ಹಾಗೂ ನಗದು‌ ಹಣ ಕಳವು ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಪರಶುರಾಮ ಕಳಕಪ್ಪ ಉಪ್ಪಳ ಎಂಬುವವರ ಮನೆಯಲ್ಲಿ ಬಂಗಾರದ ಸುತ್ತುಂಗುರ, ಬಂಗಾರದ ಡೋರ್, ಬೆಂಡೊಲಿ ಸೇರಿದಂತೆ ನಗದು ಹಣ 65 ಸಾವಿರ ರೂ ಒಟ್ಟು 1 ಲಕ್ಷ 45 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣ …

Read More »

ದಿವಾಕರ ಪೂಜಾರ್ ವಯೋ ನಿವೃತ್ತಿ ಕಾರ್ಯಕ್ರಮ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಬಾಲಕರ ಪ್ರೌಢ ಶಾಲಾ ಉಪ ಪ್ರಾಂಶುಪಾಲ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು. ಸ್ಥಳೀಯ ಜೂನಿಯರ್ ಕಾಲೇಜಿನಲ್ಲಿ ನಡೆದ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಕಿಯರ ಪ್ರೌಢ ಶಾಲೆಯ ಮುಖ್ಯಗುರುಗಳಾದ ಬಾಲಚಂದ್ರ ಡಿಕೆ ಪೂಜಾರ್ ರವರು ಒಬ್ಬ ಮಾದರಿ ಶಿಕ್ಷಕ ಹಾಗೂ ಸರಳಜೀವಿ ನೂರಾರು ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕಗಾಗಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ,ಪ್ರಸ್ತುತ ಶಿಕ್ಷಣ …

Read More »

ತಾವರಗೇರಾ:- ಇಸ್ಪಿಟ್ ಜೂಜಾಟ 77 ಜನರ ವಿರುದ್ದ ಪ್ರಕರಣ ದಾಖಲು..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 77 ಜನರ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ಆಡದಂತೆ ಪೊಲೀಸ್ ಇಲಾಖೆ ಆದೇಶಿಸಿದ್ದರು ಕೂಡ ಅದನ್ನು ಮೀರಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿಎಸ್ ಐ ಗಳಾದ ವೈಶಾಲಿ ಝಳಕಿ ಹಾಗೂ ಪುಂಡಪ್ಪ ನಾಯಕ ದಾಳಿ ನಡೆಸಿ ಬಂಧಿತ ಆರೋಪಗಳಿಂದ ರೂ …

Read More »

ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:– ಜಿಲ್ಲೆಯ ಕೃಷಿ ಇಲಾಖೆ ಉಪ ನಿರ್ದೇಶಕರು ಹಾಗೂ ಗಜಲ್ ಕವಿ ಗಳಾದ ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ ದೊರೆತಿದೆ. ಇವರ ಗಜಲ್ ಸಾಹಿತ್ಯ ಸಾಧನೆಯನ್ನು ಗುರುತಿಸಿ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಸದರಿ ಪ್ರಶಸ್ತಿಯನ್ನು ಘೋಷಿಸಿದ್ದು ಇದೇ ಅಕ್ಟೋಬರ್ 30 ರಂದು ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಅಂಗವಾಗಿ ಗದಗ ಜಿಲ್ಲೆಯ ನರಗುಂದ ಪಟ್ಟಣದ ಭೈರವನಹಟ್ಟಿ …

Read More »

ಮುದಗಲ್ : ಪುರಸಭೆ ಮುಖ್ಯಧಿಕಾರಿ ಮರೀಲಿಂಗಪ್ಪ ವರ್ಗಾವಣೆ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ದಿ 27.10.2022ರಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್  ಆದೇಶ ಹೊರಡಿಸಿದ್ದಾರೆ.

Read More »

ಗೆಳೆಯನ ಜೀವ ಉಳಿಸಲು ಯುವಕರಿಂದ ದೇಣಿಗೆ ಸಂಗ್ರಹ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಯುವಕರ ಗುಂಪೊಂದು ತಮ್ಮ ಗೆಳೆಯನ ಜೀವ ಉಳಿಸಲು ಜನರಿಂದ ದೇಣಿಗೆ ಸಂಗ್ರಹಣೆ ಮಾಡಿ ಆಸ್ಪತ್ರೆಗೆ ಕಳಿಹಿಸುವ ಮೂಲಕ ಯುವಕರು ಮಾನವೀಯತೆ ಮೆರದಿದ್ದಾರೆ.  ಪಟ್ಟಣದ ನಿವಾಸಿಯಾದ ಬಸವರಾಜ್ ಎಂಬುವತನಿಗೆ ಕೈ,ತಲೆ,ಕಾಲು,ಬಾಯಿ ಗೆ ಪಾರ್ಶ್ವವಾಯು ಆಗಿ ಗಂಭೀರ ಸ್ಥಿತಿಯಲ್ಲಿಯಲ್ಲಿದ್ದು ಬಡ ಕುಟುಂಬ ಹಾಗೂ ಚಿಕ್ಕ ವಯಸ್ಸಿನಲ್ಲಿ  ತಂದೆ – ತಾಯಿಯನ್ನ ಕಳೆದುಕೊಂಡ ಬಸವರಾಜನಿಗೆ ಗೆಳೆಯರೇ ತಂದೆ-ತಾಯಿಯಾಗಿ ನಿಂತು  ಚಿಕಿತ್ಸೆಗಾಗಿ ಯುವಕರೆಲ್ಲ ಸೇರಿ ಪಟ್ಟಣದಲ್ಲಿ ದೇಣಿಗೆ ಸಂಗ್ರಹಣೆ …

Read More »

ದೀಪಾವಳಿ ದಿನದಂದೆ, ಇಬ್ಬರು ಬಾಲಕರು ನೀರು ಪಾಲು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ದೀಪಾವಳಿ ಹಬ್ಬದ ದಿನದಂದೇ ತಾಲೂಕಿನ ನಿಲೋಗಲ್ ಸಮೀಪದ ರಾಂಪುರ ಗ್ರಾಮದ ಇಬ್ಬರು ಬಾಲಕರು ನೀರು ಪಾಲಾಗಿ ಮೃತಪಟ್ಟ ದುರ್ದೈವ ಘಟನೆ ನಡೆದಿದೆ. ಮೃತ ಬಾಲಕರನ್ನು ರಾಂಪುರ ಗ್ರಾಮದ ಮಹಾಂತೇಶ ಮಲ್ಲಪ್ಪ ಮಾದರ (9) ಹಾಗೂ ವಿಜಯ ಮಾದರ (9) ನೀರು ಪಾಲಾಗಿರುವ ನತದೃಷ್ಟ ಬಾಲಕರು ಎಂದು ಗುರುತಿಸಲಾಗಿದ್ದು , ಗ್ರಾಮದ ವಕ್ಕನದುರ್ಗಾ ರಸ್ತೆಗೆ ಹೊಂದಿರುವ ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಬೃಹತ್ ಆಕಾರದ ಗುಂಡಿಯಲ್ಲಿನ …

Read More »

ನಾಳೆ ಕಾಂಗ್ರೆಸ್, ಜೆಡಿಎಸ್ ಪಕ್ಷದ 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ : ಸಿದ್ದಯ್ಯ ಸ್ವಾಮಿ 

ನಾಗರಾಜ್ ಎಸ್ ಮಡಿವಾಳರ ಮುದಗಲ್ : ನಾಳೆ 200ಕ್ಕೂ ಹೆಚ್ಚು ಜೆಡಿಎಸ್ ಹಾಗೂ  ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಾಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಘಟಕಧ್ಯಕ್ಷ ಸಣ್ಣ ಸಿದ್ದಯ್ಯ ಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು ನಾಳೆ ರಾಮಲಿಂಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಮುಖಂಡರು ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮುಂಬರುವ …

Read More »
error: Content is protected !!