Sunday , September 8 2024
Breaking News
Home / Breaking News

Breaking News

ತಾವರಗೇರಿಯ ಕನ್ನಡ “ರತ್ನ ” ಪಿ ವಾಯ್ ದಂಡಿನ್ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಕನ್ನಡ ಉಪನ್ಯಾಸಕರು ಹಾಗೂ ಉತ್ತರ ಕರ್ನಾಟಕದಲ್ಲಿಯೇ ಸರಳ ಸಜ್ಜನಿಕೆಯ ಕನ್ನಡ ನಿಘಂಟುಕಾರರು ಹಾಗೂ ಹಾಸ್ಯ ಭರಿತ ಮಾತುಗಳಿಂದ ಮನೆ ಮಾತಾಗಿದ್ದ ಪಿವೈ ದಂಡಿನ್ ಸರ್ ಇನ್ನಿಲ್ಲ ಎಂಬುದೇ ದುಃಖದ ವಿಷಯ ಜೊತೆಗೆ ತಮ್ಮ ಸರಳತೆಯಿಂದಲೇ ಗುರಿತಿಸಿಕೊಂಡಿದ್ದ ಪರಮೇಶಪ್ಪ ಯಲ್ಲಪ್ಪ ದಂಡಿನ್ ಎಂಬ ಗುರುಗಳು ಅಪಾರ ಪ್ರಮಾಣದ ಶಿಷ್ಯರನ್ನು ಹೊಂದಿದ್ದು ವಿದೇಶದಲ್ಲಿಯೂ ಕೂಡ ವಿದ್ಯಾರ್ಥಿಗಳು ಇವರ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂಬುದು ಇತ್ತೀಚಿಗೆ ನಡೆದ …

Read More »

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ 

ನಾಗರಾಜ ಎಸ್ ಮಡಿವಾಳರ್  ಮುದಗಲ್  : ಲಿಂಗಸಗೂರು ತಾಲೂಕಿನ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಿಂಗಸುಗೂರು ಶಿಶು ಅಭಿವೃದ್ಧಿ. ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆಯರ-18 ಮತ್ತು ಸಹಾಯಕಿಯರ-51 ಹುದ್ದೆಗಳನ್ನು ಆನ್‌ಲೈನ್ ವೆಬ್‌ಸೈಟ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು https://karnemakaone.kar.nic.in/abcd/ ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು  ದಿನಾಂಕ :30-08-2024 ರಿಂದ 29-09-2024 ರೊಳಗಾಗಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಲಿಂಗಸುಗೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …

Read More »

ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿಗಳು ಸ್ಥಗಿತ : ಹೂಲಗೇರಿ 

ನಾಗರಾಜ ಎಸ್ ಮಡಿವಾಳರ  ಮುದಗಲ್ : ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಡಿ ಎಸ್ ಹೂಲಗೇರಿ ಮುದಗಲ್ ಪಟ್ಟಣದಲ್ಲಿ ಹಲವು ಕಾಮಗಾರಿಗಳಿಗೆ ನಾವು ಚಾಲನೆ ನೀಡಿದ್ದೇವೆ ಆದರೆ ಈಗ ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿ ಸ್ಥಗಿತಗೊಂಡಿವೆ ಎಂದರು. ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಾತನಾಡಿದ ಅವರು ಪುರಸಭೆ ಅಭಿವೃದ್ಧಿಗಾಗಿ ನಾವು ಶಾಸಕರಿದ್ದಾಗ ನಗರೋತ್ಥಾನ ಯೋಜನೆಯಡಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಆದರೆ ತಾಲೂಕಿನ …

Read More »

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ ಹೊಂದಿದ  ಪಟ್ಟಣದಲ್ಲಿ  ಸಾಕಷ್ಟು  ಸಮಸ್ಯೆಗಳು ಸವಾಲಾಗಿ ಪರಿಣಮಿಸಿದ್ದು, ಸವಾಲುಗಳನ್ನು ಎದುರಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಮಾನವ ಬದುಕಲು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಸಮರ್ಪಕ ನಿರ್ವಹಣೆಯಾಗದಿರುವ ಕಾರಣ ಸ್ಥಳೀಯ ನಿವಾಸಿಗಳು 8-9 ದಿನಗಳಕಾಲ ನೀರು ಶೇಖರಣೆ ಮಾಡಿ  ಕುಡಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿ ವರ್ಷಗಳೇ ಕಳೆದು ಹೋಗಿವೆ  …

Read More »

ಮುದಗಲ್  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ    ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್  ಆಯ್ಕೆ 

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ ಗುತ್ತೇದಾರ ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ  ಶಾಂಶಲಾಂ ಹೇಳಿದರು. ಸರಕಾರ ಕೆಲ ದಿನಗಳ ಹಿಂದೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ ಮಹಿಳೆ  ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಸದಸ್ಯರಲ್ಲಿ   ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ  15 ನೇ  ವಾರ್ಡ್ ಸದಸ್ಯೆ ಮಹಾದೇವಮ್ಮ ಗುತ್ತೇದಾರ ರನ್ನ ಅಧ್ಯಕ್ಷೆಯಾಗಿ 14ನೇ ವಾರ್ಡ್ …

Read More »

ಮೂಡ ಹಗರಣವೇ ಅಲ್ಲ, ಸಿದ್ದರಾಮಯ್ಯರ  ಪಾತ್ರ ಇಲ್ಲ : ಶರಣಬಸಪ್ಪ ದರ್ಶನಾಪುರ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :    ಮೂಡ ಒಂದು ಹಗರಣವೇ ಅಲ್ಲ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ  ಶರಣಬಸಪ್ಪ ದರ್ಶನಾಪುರ ಹೇಳಿದರು. ಮಂಗಳವಾರ ಸಮೀಪದ ಸಜ್ಜಲಗುಡ್ಡದ ಶರಣಮ್ಮ ತಾಯಿ ಶ್ರೀ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ ಸುಭದ್ರ ಕಾಂಗ್ರೆಸ್ ಸರಕಾರ ಜನರ ಹೇಳಿಗೆಗಾಗಿ ನಡೆಯುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಈ ಮೂಡ ಹಗರಣ ಎಂದು …

Read More »

ಗಂಗಾವತಿ:- ಮಲ್ಲಪ್ಪ ಇಂಗಳದಾಳ ಗೆ ಆರಕ್ಷಕ ಕಲಾ ರತ್ನ ಪ್ರಶಸ್ತಿ..!

ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು:- ಗಂಗಾವತಿ ಠಾಣೆಯ ಪೊಲೀಸ್ ಸಿಬ್ಬಂದಿ ಮಲ್ಲಪ್ಪ ಇಂಗಳದಾಳ ಇವರಿಗೆ ಬೆಂಗಳೂರಿನಲ್ಲಿಂದು ನಡೆದ 2024 ನೇ ಸಾಲಿನ ಆರಕ್ಷಕ ಕಲಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಂಗಳೂರಿನ ಪೊಲೀಸ್ ಕಲಾ ಸಂಗಮ ನೀಡುವ ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದು , ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ನಾದಬ್ರಹ್ಮ ಹಂಸಲೇಖ ಅವರು ನೀಡಿದರು. ಈ ಸಂದರ್ಭದಲ್ಲಿ ಕೆಎಸ್ ಆರ್ ಪಿಯ ಕಮಾಂಡೆಂಟ್ ಅಮ್ಜದ್ ಖಾನ ಹಂಸ ಹಾಗೂ …

Read More »

ಸುಪ್ರೀಂ ಕೋರ್ಟ್‌ ತೀರ್ಪು: “ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಬದುಕುವ ಭರವಸೆ”

ಶ್ರೀಕಾಂತ ಆರ್ ಜಿ ಲಿಂಗಸೂಗೂರ ಪರಿಶಿಷ್ಟ ಜಾತಿ ಒಳಮೀಸಲು ಸೌಲಭ್ಯ ಕಲ್ಪಿಸಬೇಕು ಎಂದು ಮಾಡಿದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 01) ಪ್ರಕಟಿಸಿದ ತೀರ್ಪು ಐತಿಹಾಸಿಕ ಗೆಲುವು ತಂದುಕೊಟ್ಟಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಒಳಮೀಸಲಾತಿ ಸಂಬಂಧ ಜಾರಿಗೆ ಮುಂದಾಗಿದ್ದ ನಡೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಮೀಸಲಾತಿ ವರ್ಗೀಕರಣ ಸಂವಿಧಾನಾತ್ಮಕ ನಿರ್ಧಾರ ಎಂಬ ಸಂದೇಶ ನೀಡಿದೆ. ಸತತ …

Read More »

ಕಂದಾಯ ಇಲಾಖೆಯ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿ

ಶ್ರೀಕಾಂತ ಆರ್ ಜಿ ಲಿಂಗಸೂಗೂರ ಲಿಂಗಸೂಗೂರು ಜು 28:- 2024 ನೇ ಸಾಲಿನ ವಾರ್ಷಿಕ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾಯಿತು. ಲಿಂಗಸೂಗೂರ, ದೇವದುರ್ಗ, ಮಸ್ಕಿ, ಸಿಂಧನೂರು ತಾಲೂಕಿನ ಸಿಬ್ಬಂದಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಮೊದಲನೇ ಬಹುಮಾನವನ್ನು ಲಿಂಗಸೂಗೂರ ತಂಡ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ದೇವದುರ್ಗ ತಂಡ ಪಡೆದುಕೊಂಡಿದ್ದೆ, ಪಂದ್ಯ ಸರಣಿ ಶ್ರೇಷ್ಠ ಸಹಾಯಕ ಆಯುಕ್ತರಾದ ಶಿಂದೆ ಅವಿನಾಶ ರವರಿಗೆ , ಉತ್ತಮ ಬೌಲರ್ ಕಿರಣ ಲಿಂಗಸೂಗೂರ …

Read More »

ಲಿಂಗಸಗೂರ:- ಕಾರು, ಬೈಕ್ ಡಿಕ್ಕಿ, ಸವಾರರಿಗೆ ಗಾಯ..!

ಲಿಂಗಸಗೂರು:- ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಬೈಕ್ ಸವಾರರು ಕಾರಿನ ಮದ್ಯ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ಗಾಯ, ಕಾರು ಜಕಮಗೊಂಡ ಘಟನೆ ನಡೆದಿದೆ. ರಸ್ತೆ ಕಾಮಗಾರಿ ನಡೆಯುತಿದ್ದು, ಸರಿಯಾದ ಮಾರ್ಗ ಸೂಚಿಗಳಿಲ್ಲದೆ, ಬೈಕ್ ಸವಾರರ ಅತಿವೇಗದಿಂದ ಅಪಘಾತ ಹೆಚ್ಚುತ್ತಿವೆ.

Read More »
error: Content is protected !!