Wednesday , October 23 2024
Breaking News
Home / N Shameed (page 4)

N Shameed

ತಾವರಗೇರಾ:- ರಾಜ್ಯ ತಂಡಕ್ಕೆ ಮಹಮ್ಮದ್ ಕೈಫ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಹಮ್ಮದ್ ಕೈಫ್ ಹೆಸರು ಕೇಳಿದ ತಕ್ಷಣ ನೆನಪಾಗುವುದು ಭಾರತ ಕ್ರಿಕೆಟ್ ತಂಡದ ಉತ್ತಮ ಆಟಗಾರ ಅದರಂತೆಯೇ ಸ್ಥಳೀಯ ಡಿಗ್ರಿ ಕಾಲೇಜಿನ ಮಹಮ್ಮದ್ ಕೈಫ್ ಎಂಬ ವಿದ್ಯಾರ್ಥಿಯು ಹ್ಯಾಂಡ್ ಬಾಲ್ ನಲ್ಲಿ ಕೊಪ್ಪಳ ಜಿಲ್ಲೆಯಿಂದ ಆಯ್ಕೆ ಆಗುವ ಮೂಲಕ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾನೆ. ಇದಕ್ಕೆ ಕಾರಣೀಭೂತರಾದ ಕಾಲೇಜಿನ ದೈಹಿಕ ಶಿಕ್ಷಕ ಶ್ರೀನಾಥ್ ಗೋತ್ರ, ಕೊಪ್ಪಳ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ರವಿ …

Read More »

ತಾವರಗೇರಾ: ಕಾರ್ ಬೈಕ್ ಡಿಕ್ಕಿ ಓರ್ವ ವ್ಯಕ್ತಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಾರು ಹಾಗೂ ಬೈಕ್ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಒರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು ಇನ್ನಿತರ 6 ಜನರು ಗಾಯಗೊಂಡ ಘಟನೆ ಸಮೀಪದ ಬಚನಾಳ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿವರಾಜ ಪಿಳಿಗೇರ (23) ಎಂದು ಗುರುತಿಸಲಾಗಿದೆ. ತಾವರಗೇರಾ ದಿಂದ ಬಚನಾಳ ಗ್ರಾಮಕ್ಕೆ ಶಿವರಾಜ ನು ತನ್ನ ಬೈಕ್ ಮೇಲೆ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಈ …

Read More »

ತಾವರಗೇರಾ:- ಕಾಲೇಜಿನ ಕಾರಿಡಾರ್, ಕುಡುಕರ ಬಾರ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶಾಲೆಯೇ ದೇವಾಲಯ ಮಕ್ಕಳೇ ದೇವರು ಎಂಬ ನಾಣ್ಣುಡಿಯಂತೆ ಇಲ್ಲಿಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇದಕ್ಕೆ ವಿರುದ್ಧವಾಗಿ ರಾತ್ರಿ ವೇಳೆ ಕಾಲೇಜಿನ ಕಾರಿಡಾರ್ ಕುಡುಕರ ತಾಣವಾಗಿ ಮಾರ್ಪಟ್ಟಿರುವುದು ದುರಂತವೇ ಸರಿ. ಈ ಬಗ್ಗೆ ಸಾರ್ವಜನಿಕರು ತಮ್ಮ ಮಕ್ಕಳು ಓದುವ ಕಾಲೇಜಿನಲ್ಲಿ ಈ ರೀತಿ ನಡೆಯುತ್ತಿರುವುದು ಅಸಯ್ಯ ಮೂಡುವಂತಾಗಿದ್ದು ತಕ್ಷಣವೇ ಸಂಭಂದಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು …

Read More »

ತಾವರಗೇರಾ: ಸಂಭ್ರಮದ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಕಳಸ ಕುಂಭ, ಜಾನಪದ ನೃತ್ಯ ಮತ್ತು ವಾಧ್ಯಗಳೊಂದಿಗೆ ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ನಂತರ ದೇವಸ್ಥಾನದಲ್ಲಿ ಅಗ್ನಿಕುಂಡ , ಅಯ್ಯಾಚಾರ ಹಾಗು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಜಾತ್ರೆ ಪ್ರಯುಕ್ತ ವಸ್ತು ಪ್ರದರ್ಶನ ಮತ್ತು ಆರೋಗ್ಯ ಇಲಾಖೆಯು ಹಾಗೂ ಗವಿಸಿದ್ದೇಶ್ವರ ಖಾಸಗಿ ಆಸ್ಪತ್ರೆಯ ಆಡಳಿತದಿಂದ ಉಚಿತ ಆರೋಗ್ಯ ತಪಾಸಣೆ …

Read More »

ತಾವರಗೇರಾ-ಕುಷ್ಟಗಿ ಡಿಗ್ರಿ ಕಾಲೇಜಿಗೆ ರ‌್ಯಾಂಕ್ ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ನಬೀಸಾಬ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ 4 ನೇ ಸ್ಥಾನ ಹಾಗೂ ಕುಷ್ಟಗಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಮಾಸವ್ವ ಮಾಲಪ್ಪ 6 ನೇ ಸ್ಥಾನ ಪಡೆಯುವ ಮೂಲಕ ಕುಷ್ಟಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ನಡೆಸಿದೆ 2022-23 ನೇ ಸಾಲಿನ ಬಿ.ಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಇವರಿಬ್ಬರು ರ್ಯಾಂಕ್ ಗಳಿಸುವ …

Read More »

ಕುಷ್ಟಗಿ:- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಆರೋಪಿಗೆ 20 ವರ್ಷ ಜೈಲು ಶಿಕ್ಷೆ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೋ ಕಾಯ್ದೆಯಡಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಪೊಲೀಸ್ ಠಾಣೆ ವ್ಯಾಪ್ತಿಯ ಗೋತಗಿ ಗ್ರಾಮದಲ್ಲಿ ದಿನಾಂಕ 03-10-2020 ರಂದು ಮಧ್ಯಾಹ್ನ ಅಪ್ರಾಪ್ತ ಬಾಲಕಿ ಶಿರಗುಂಪಿ ರಸ್ತೆ ಹಳ್ಳದ ಹತ್ತಿರ ಬಹಿರ್ದೆಸೆಗೆಂದು ಹೋರಟಾಗ ದ್ವೀಚಕ್ರ ವಾಹನದಲ್ಲಿ ಬಂದ ಸಂಗಮೇಶ ಎಂಬ ವ್ಯಕ್ತಿಯು ಬಾಲಕಿಯನ್ನು ಅಪಹರಿಸಿ ಬಲವಂತದಿಂದಾಗಿ ಅತ್ಯಾಚಾರ ನಡೆಸಿದ …

Read More »

ತಾವರಗೇರಾ: ಸಡಗರ ಸಂಭ್ರಮದ , ಗಣರಾಜ್ಯೋತ್ಸವ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ವಿವಿಧ ಶಾಲಾ ಕಾಲೇಜು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು. ನಂತರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಧ್ವಜಾರೋಹಣ ಸಮಾರಂಭದಲ್ಲಿ ವಿವಿಧ ಗಣ್ಯರು ಹಾಗೂ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಹಾಗೂ ಸದಸ್ಯರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಹಾಗೂ ಮುಖ್ಯ ಗುರುಗಳು, ದೈಹಿಕ ಶಿಕ್ಷಕರು …

Read More »

ತಾವರಗೇರಾ: ಶ್ರೀ ರಾಮನ, ಸಂಭ್ರಮಾಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ದೇವಾಲಯ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ದೇವಸ್ಥಾನಗಳಲ್ಲಿ ಹೋಮ, ಹವನ ಹಾಗೂ ಪೂಜೆ ಸಂಭ್ರಮದಿಂದ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಂತರ ಇಲ್ಲಿಯ ಶ್ರೀರಾಮ ಮಂದಿರದಲ್ಲಿ ಅಭಿಷೇಕ ಪೂಜೆ ನಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯದ ಹೆಸರಾಂತ ಪತ್ರಿಕೆಯಾದ …

Read More »

ಕಟಾವ್ ಮಷೀನ್ ಗೆ ಸಿಲುಕಿ ವ್ಯಕ್ತಿ ಸಾವು.!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ತೊಗರಿ ಬೆಳೆ ಕಟಾವ ಮಾಡುವ ಯಂತ್ರದ ವಾಹನದ ಹಿಂದಿನ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇದ್ಲಾಪೂರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪಂಜಾಬ್ ಮೂಲದ ಗುರುದೇವ ಸಿಂಗ್ (58) ಎಂದು ಗುರುತಿಸಲಾಗಿದೆ. ಮುದೇನೂರ ಮೂಲದ ವ್ಯಕ್ತಿಯೊಬ್ಬರು ತೊಗರಿ ಬೆಳೆ ಕಟಾವ ಮಾಡುವ, ಕರೆಯ ಮೇರೆಗೆ ಬಂದಿದದ್ದರೆನ್ನಲಾದ ಚಾಲಕ ಹಾಗು ಸಹಾಯಕನಾಗಿದ್ದಾರೆ. ಇದ್ಲಾಪುರ ಸೀಮಾದ ಹೊಲ ವೊಂದರಲ್ಲಿ ಚಾಲಕನ ನಿರ್ಲಕ್ಷ್ಯ ದಿಂದ ಹಿಂದೆ …

Read More »

ತಾವರಗೇರಾ:- ಸಾಲ ಬಾಧೆ ರೈತ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಾಲ ಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಹುಲಿಯಾಪುರ ಗ್ರಾಮದಲ್ಲಿ ನಡೆದಿದೆ . ಮೃತ ರೈತನನ್ನು ಕಲ್ಲಪ್ಪ ಹನುಮಪ್ಪ ಕತಿಗೇರ (42) ಎಂದು ಗುರುತಿಸಲಾಗಿದ್ದು , ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೃತ ರೈತನು ಮನ್ನಾಪುರ ಪಿಜಿಬಿ ಬ್ಯಾಂಕ್ ನಿಂದ 2 ಲಕ್ಷ ರೂ ಬೆಳೆ ಸಾಲ ಹಾಗೂ ಕನಕಗಿರಿಯ ಎಲ್ ಎನ್ ಟಿ ಗುಂಪಿನಲ್ಲಿ 1 ಲಕ್ಷ 20 …

Read More »
error: Content is protected !!