Wednesday , October 23 2024
Breaking News
Home / N Shameed (page 49)

N Shameed

ಕುಷ್ಟಗಿ: ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ; ಪಂಚಮಸಾಲಿ ಸಮುದಾಯಕ್ಕೆ 2 ಎ ಹಾಗೂ ಲಿಂಗಾಯತ ಬಡ ಸಮಾಜಕ್ಕೆ ಕೇಂದ್ರ ‌ಒ,ಬಿ,ಸಿ ‌ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಸಮಾಜದವರು ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು. ಶನಿವಾರದಂದು ಬಸವೇಶ್ವರ ವೃತ್ತದಿಂದ ತಹಶಿಲ್ದಾರರ ಕಚೇರಿ ಗೆ ಪಾದಯಾತ್ರೆ ಮೂಲಕ ತೆರಳಿ ಪಂಚಸೇನೆ ಹಿರಿಯ ಮುಖಂಡ ದೆವೇಂದ್ರಪ್ಪ ಬಳೂಟಗಿ ಅವರು ತಹಶಿಲ್ದಾರರ ಮ‌ೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಬದಲ್ಲಿ ಪಂಚಸೇನೆ ತಾಲೂಕ ಅಧ್ಯಕ್ಷ ವೀರೆಶ …

Read More »

ಗುಮಗೇರಿಯಲ್ಲಿ ನಡೆದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನ

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:  ಕನ್ನಡ ನಾಡು ನುಡಿ ಜಲ ರಕ್ಷಣೆ ಗಾಗಿ ಪ್ರತಿಯೊಬ್ಬ ಕನ್ನಡಿಗರು ಒಂದಾಗಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಬುಧವಾರ ದಂದು ತಾಲೂಕಿನ ಗುಮಗೇರಿ ಯಲ್ಲಿ ನಡೆದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿಕ್ಸೂಚಿ ಭಾಷಣದಲ್ಲಿ ಹೇಳಿ, ಗಡಿ ನಾಡು ರಕ್ಷಣೆ ವಿಷಯದಲ್ಲಿ ಪಕ್ಷ, ಜಾತಿ, ಮತ ಎನ್ನದೆ ಕನ್ನಡ ಭಾಷೆಗಾಗಿ ಒಗ್ಗಟ್ಟಿನಿಂದ ಮುಂದೆ ಬರಬೇಕು ತಾಲೂಕಿನ ಸಾಹಿತ್ಯ …

Read More »

ತಾವರಗೇರಾ: ವಿಶ್ವ ವನ್ಯಜೀವಿ ದಿನದಂದೆ ಬಲೆಗೆ ಬಿದ್ದ ಕರಡಿ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ 15 ದಿನಗಳ ಹಿಂದೆ ರೈತರ ತೋಟಕ್ಕೆ ದಾಳಿ ಮಾಡಿದ್ದ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ. ಬುಧವಾರ ಮದ್ಯಾಹ್ನ ಪಟ್ಟಣದ ಬಸಪ್ಪ ಗಡಗಿ ಅವರ ತೋಟದ ಹತ್ತಿರ ಇಡಲಾಗಿದ್ದ ಬೋನಿಗೆ ಬಿದ್ದ ಕರಡಿಯನ್ನು ಸೆರೆ ಹಿಡಿದ ಅರಣ್ಯ ಇಲಾಖೆಯವರು ಕುಷ್ಟಗಿಯ ಕಲಕೇರಿ ಫಾರ್ಮ್ ನಲ್ಲಿ ಇರಿಸಿದ್ದು, ಇದನ್ನು ಕಮಲಾಪುರ ಕರಡಿದಾಮಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಉಪ ಅಧಿಕಾರಿ ರಿಯಾಜ ತಿಳಿಸಿದ್ದಾರೆ. …

Read More »

ರೈತರ ದಾಳಿಂಬೆ ಬೆಳೆ ಸಾಲ ಮನ್ನಾದ ಬಗ್ಗೆ ಚರ್ಚಿಸಲಾಗುವುದು – ಸಚಿವ ಆರ್ ಶಂಕರ್

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :ಪಟ್ಟಣದ ಹೊರ ವಲಯದಲ್ಲಿರುವ ನಂದಿ ಆಗ್ರೋ ಫಾರಂ ಹೌಸ್ ಗೆ ಮತ್ತು ಅಂಬಣ್ಣ ಕಂದಗಲ್ ಅವರ ತೋಟಕ್ಕೆ ಮಂಗಳವಾರ ತೋಟಗಾರಿಕೆ ಸಚಿವ ಆರ್ ಶಂಕರ್ ಭೆಟ್ಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ತೋಟಗಾರಿಕೆ ಸಚಿವ ಆರ್ ಶಂಕರ್ ಮಾತನಾಡಿ, ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಜಿಲ್ಲೆಯ ಪೇರಲ ಬೆಳೆ ಆಯ್ಕೆಯಾಗಿದ್ದು, ರೈತರು ಬೆಳೆದ ಪೇರಲ ಬೆಳೆಗಳಿಗೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವು …

Read More »

ರೈತರು ಹಾಗೂ ಅಧಿಕಾರಿಗಳೊಂದಿಗೆ ಪೇರಲ ಹಣ್ಣನ್ನು ತಿಂದು ಸರಳತೆ ಮೆರೆದ ಸಚಿವ ಆರ್ ಶಂಕರ್

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣಕ್ಕೆ ಆಗಮಿಸಿದ್ದ ತೋಟಗಾರಿಕೆ ಸಚಿವ ಆರ್ ಶಂಕರ್ ಅವರು ರೈತರ ತೋಟಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಕೂಡ ರೈತರೊಂದಿಗೆ ಬೆರೆತು ಇಲ್ಲಿಯ ಅಂಬಣ್ಣ ಕಂದಗಲ್ ಅವರ ತೋಟಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸರಳತೆ ಮೆರೆದು ತಾವೇ ತೋಟದಲ್ಲಿಯ ಪೇರಲ ಹಣ್ಣಿನ ರುಚಿ ಸವಿದಿರುವುದು ಅಲ್ಲಿ ನೆರೆದಿದ್ದ ರೈತರಿಗೂ ಹಾಗೂ ಸಾರ್ವಜನಿಕರಿಗೂ ಆಶ್ಚರ್ಯದ ಜೊತೆಗೆ ಸಚಿವರ ಸರಳ ಸಜ್ಜನಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ …

Read More »

ಸರ್ಕಾರವು ಅನುದಾನಿತ ಶಾಲೆಗಳನ್ನು ಕಡೆಗಣಿಸುವುದು ‘ಸರಿಯಲ್ಲ’ – ಮಲ್ಲನಗೌಡ ಓಲಿ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸರ್ಕಾರವು ಅನುದಾನಿತ ಶಾಲಾ,ಕಾಲೇಜುಗಳಿಗೆ ಮಲತಾಯಿ ಧೋರಣೆ ಮಾಡುತ್ತಿರುವುದು ಸರಿಯಲ್ಲ ಎಂದು ತಾವರಗೇರಾ ಶಿಕ್ಷಕರ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಮಲ್ಲನಗೌಡ ಓಲಿ ಹೇಳಿದರು. ಪಟ್ಟಣದ ತಾವರಗೇರಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೨೦೨೦-೨೧ ನೇ ಸಾಲಿನ ಡಿಎಲ್ ಡಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ …

Read More »

ಬೈಕ್ ತೊಳೆಯಲು ಹೋಗಿ ವಿದ್ಯಾರ್ಥಿ ನೀರುಪಾಲು

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ ಸಮೀಪದ ಹುಲಿಯಾಪುರ ಗ್ರಾಮದ ಯುವಕ ಕೆರೆಯಲ್ಲಿ ಬೈಕ್ ತೊಳೆಯಲು ಹೋಗಿ ಜಾರಿ ಬಿದ್ದು ಮೃತಪಟ್ಟ ಘಟನೆ ಜರುಗಿದೆ. ಮೃತ ಯುವಕ ಹುಲಿಯಾಪುರ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮುಸ್ತಫಾ ಮೈಹಿಬೂಬಸಾಬ ಹನಮಸಾಗರ (19) ವರ್ಷ ಎಂದು ತಿಳಿದುಬಂದಿದೆ‌. ರವಿವಾರ ದಂದು ಬೈಕ್ ಹಾಗೂ ಬಟ್ಟೆ ತೊಳೆಯಲೆಂದು ಹುಲಿಯಾಪುರ ಕೆರೆಗೆ ಹೋಗಿದ್ದ ಎನ್ನಲಾಗಿದೆ. ಸಂಜೆಯಾದರೂ ವಾಪಸ ಬರದ ಹಿನ್ನೆಲೆ ಬಾಲಕರು ಹಾಗೂ ಗ್ರಾಮಸ್ಥರು …

Read More »

ಕವಿತಾಳ – ಶಿವಾಜಿ ಮಹಾರಾಜರ ಜಯಂತಿ ಆಚರಣೆ

  ವರದಿ ಆನಂದ ಸಿಂಗ್ ರಜಪೂತ ಕವಿತಾಳ :– ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ. ದೇಶಪ್ರೇಮ ಮತ್ತು ಆದರ್ಶಗಳು ಯುವಕರಿಗೆ ಸದಾ ಪ್ರೇರಕ ಶಕ್ತಿಯಾಗಿದೆ ಎಂದು ದೇವರಾಜ ನಾಗಲೀಕರ್ ಅನ್ವರಿ ಹೇಳಿದರು. ಪಟ್ಟಣದ ಶ್ರೀ ವಾಸವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು ಶಿವಾಜಿಗೆ ರಕ್ತಗತವಾಗಿ ಧೈರ್ಯ ಶಕ್ತಿ ಹಾಗೂ ಕ್ಷತ್ರಿಯ ಗುಣಗಳಿದ್ದವು ಶಿವಾಜಿಯವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು …

Read More »

ಸಂಭ್ರಮದ ಶಿವಾಜಿ ಭಾವಚಿತ್ರ ಮೆರವಣಿಗೆ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಸೇರಿ ರವಿವಾರ ಶಿವಾಜಿ ಭಾವಚಿತ್ರದ ಮೆರವಣಿಗೆ ನಡೆಸಿದರು. ಸ್ಥಳೀಯ ಶ್ರೀ ರಾಮ ಮಂದಿರ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಊರಿನ ಪ್ರಮುಖ ಬೀದಿಗಳ ಮುಖಾಂತರ ಪುನಃ ರಾಮ ಮಂದಿರಕ್ಕೆ ಬಂದು ತಲುಪಿತು. ಮೆರವಣಿಗೆ ಸಂಧರ್ಬದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಂಡು ಅದ್ದೂರಿ ಯಾಗಿ ಮೆರವಣಿಗೆ ನಡೆಸಿದರು . ಈದೇ ಪ್ರಥಮ ಬಾರಿಗೆ ಶಿವಾಜಿ ಜಯಂತಿ ಯನ್ನು ಆಚರಿಸಿರುವುದು ವಿಶೇಷ ವಾಗಿತ್ತು. ಈ …

Read More »

ಉದಯವಾಹಿನಿ ವರದಿಗೆ ಸ್ಪಂದನೆ, ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶನಿವಾರ ಬೆಳಗಿನ ಜಾವ ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಉದಯವಾಹಿನಿ ಯಲ್ಲಿ ಸುದ್ದಿ ಪ್ರಕಟ ಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಗಾಣಗಿತ್ತಿ ಗುಡ್ಡ ಹಾಗೂ ಸುತ್ತಮುತ್ತಲಿನ ಗದ್ದೆರಹಟ್ಟಿ ಸೇರಿದಂತೆ ಗುಡ್ಡದಲ್ಲಿ ಪರಿಶೀಲನೆ ನಡೆಸಿ ಅಲ್ಲಿಯ ಸಾರ್ವಜನಿಕರ ಮಾಹಿತಿ ಪಡೆದು ಚಿರತೆ ಸೆರೆ ಹಿಡಿಯಲು ಬೋನ್ ಅನ್ನು ಅಳವಡಿಸಿದ್ದಾರೆ. ನಂತರ ಉಪವಲಯ ಅರಣ್ಯ …

Read More »
error: Content is protected !!