Friday , September 20 2024
Breaking News
Home / Nagaraj M (page 34)

Nagaraj M

ಲಿಂಗಸಗೂರು ಶಾಸಕರೇ ಕಣ್ಮುಚ್ಚಿ ಕುಳಿತಿದ್ದೀರಾ : ಕರವೇ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಮುದಗಲ್ ಪಟ್ಟಣದ ಮೂಲಕ ಹಾದು ಹೋಗುವ  ರಾಯಚೂರು -ಬೆಳಗಾವಿ   ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು,ರಸ್ತೆ ಕಾಮಗಾರಿಗೆ ಟೆಂಡರ್ ಕರೆದಿದ್ದೇವೆ ಎಂದು ಬರಿ ಬರವಸೆ ನೀಡುತ್ತಿದ್ದೂ ಕಾರ್ಯ ಮಾತ್ರ ಪ್ರಾರಂಭವಾಗಿಲ್ಲ ಎಂದು  ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ  ವಿರುದ್ಧ  ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು  ಧಿಕ್ಕಾರ ಕೂಗಿ ಶಾಸಕರೇ ಕಣ್ಮುಚ್ಚಿ ಕುಳಿತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ …

Read More »

ವೀರಭದ್ರಪ್ಪ ಹೂಗಾರ ನಿಧನ 

ಕವಿತಾಳ : ಪಟ್ಟಣದ ನಿವಾಸಿ ಹೂಗಾರ ಸಮಾಜದ ಹಿರಿಯರು ನಿವೃತ್ತ ಹಿಂದಿ ಶಿಕ್ಷಕರಾದ ಜಿ. ವೀರಭದ್ರಪ್ಪ ಹೂಗಾರ (81) ಸೋಮವಾರ ಬೆಳಗಿನ ಜಾವ 2.30 ಕ್ಕೆ ನಿಧನ ಹೊಂದಿದರು. ಮೃತರ ಪತ್ನಿ. ಒಬ್ಬ ಪುತ್ರ. ಸೊಸೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಧ್ಯಾಹ್ನ 2. 30 ಕ್ಕೆ ನಡೆಯುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More »

ನೂತನ ಗೃಹಪ್ರವೇಶಕ್ಕೆ ಸಸಿ ಉಡುಗೊರೆ ನೀಡಿದ ಗಣೇಶ್ ಕನ್ನಾಳ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ರಾಮಲಿಂಗಶ್ವರ ಕಾಲೋನಿ ಯಲ್ಲಿ ಗಣೇಶ್ , ರಾಘವೇಂದ್ರ ಕನ್ನಾಳ ಎಂಬುವರರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ,ಗಣ್ಯರಿಗೆಲ್ಲರಿಗೆ  ವಿವಿಧ ಸಸಿಗಳನ್ನು ಉಡುಗೊರೆಯಾಗಿ ನೀಡಿದರು. ಉದಯ ವಾಹಿನಿಯೊಂದಿಗೆ ಮಾತನಾಡಿದ ಗೆಣೇಶ್ ಕನ್ನಾಳ ನಮ್ಮ ಸುತ್ತಲಿನ ಪರಿಸರ ಚೆನ್ನಾಗಿದ್ದರೆ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯ ,ಇತ್ತೀಚಿನ ದಿನಗಳಲ್ಲಿ ಪಟ್ಟಣ ಬೆಳೆಯುವ ಅವಸರದಲ್ಲಿ  ಅರಣ್ಯ ನಾಶಕ್ಕೆ ನಾವು ಇಳಿದಿದ್ದೇವೆ, ನಾವೆಲ್ಲ ಸಸಿ ಬೆಳಸುವದರ ಮೂಲಕ ಪರಿಸರವನ್ನು ಪ್ರೀತಿಸೋಣ ಇಂತಹ …

Read More »

ಅಧ್ಯಕ್ಷರಾಗಿ ನವೀನ್ ಜಗಿರ್ದಾರ್ ಆಯ್ಕೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ರಾಷ್ಟ್ರೀಯ ದಲಿತ ಸಂಘದ ಲಿಂಗಸೂರು ನಗರ ಅಧ್ಯಕ್ಷರಾಗಿ ನವೀನ್ ಜಾಗಿರ್ದಾರ್  ಹಾಗೂ ಲಿಂಗಸೂಗುರು  ತಾಲೂಕ ಅಧ್ಯಕ್ಷರನ್ನಾಗಿ  ನಿತಿನ್ ಖಾನಾಪುರ ರವರನ್ನು ರಾಷ್ಟ್ರೀಯ ಅಧ್ಯಕ್ಷ ಮೋಹಿತ್ ನರಸಿಂಹ ಮೂರ್ತಿ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ. ಎಂದು ರಾಯಚೂರು ಜಿಲ್ಲಾಧ್ಯಕ್ಷ  ವಿನೋದ್ ಕುಮಾರ್  ತಿಳಿಸಿದ್ದಾರೆ.

Read More »

ಈಜಾಡಲು ಹೋದ 28 ವರ್ಷದ ಯುವಕ ನೀರು ಪಾಲು

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಹೊನ್ನಹಳ್ಳಿ ಗ್ರಾಮದ ಹೊರವಲಯದ  ಕಾಲುವೆಯಲ್ಲಿ ಈಜಾಡಲು ಹೋದ ಶಿವ ಎಂಬುವ  ಯುವಕ  ಕಾಣೆಯಾಗಿದ್ದಾನೆ ಯುವಕ ಬೆಳ್ಳಿಗೆ  11 ಗಂಟೆಗೆ ಗೆಳೆಯರ ಜೊತೆಗೆ ಈಜಾಡಲು ಹೋದ  ನೇಪಾಳದ  ಮೂಲದ ಯುವಕ ಈತನು ಹೊನ್ನಹಳ್ಳಿ ಗ್ರಾಮದಲ್ಲಿ ಇರುವ ತನ್ನ ಗೆಳೆಯನ ಮದುವೆಗೆ ಬೆಂಗಳೂರುನಿಂದ ಬಂದಿದ್ದ ಎಂದು ಗ್ರಾಮಸ್ಥರ ಮೂಲಕ ತಿಳಿದು ಬಂದಿದೆ.

Read More »

ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಆಧ್ಯಾತ್ಮಿಕ ಜ್ಞಾನ ಅವಶ್ಯ – ಬಿ.ಕೆ.ಸುನಂದಾ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಸೋಮವಾರಪೇಟೆಯ ಬಸವಣ್ಣನ ದೇವಸ್ಥಾನದಲ್ಲಿ  ಕಳೆದ 5 ದಿನಗಳಿಂದ  ಜನರಿಗೆ  ಸಾಯಂಕಾಲ ಐದು  ಗಂಟೆಯಿಂದ ಆರು ಗಂಟೆಯ ವರೆಗೆ   ಈಶ್ವರೀಯ  ಆಧ್ಯಾತ್ಮಿಕ ಜ್ಞಾನವದ ಕುರಿತು ಬಿ.ಕೆ.ಸುನಂದಾ ತಿಳಿಸಿಕೊಟ್ಟರು. ಕಾರ್ಯಕ್ರಮದ ಕುರಿತು ಮಾತನಾಡಿದ ಬಿ ಕೆ ಸುನಂದಾ ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ಯೋಗ , ಧ್ಯಾನಗಳಂತಹ ಆಧ್ಯಾತ್ಮಿಕ ಅಭ್ಯಾಸಗಳ ಅವಶ್ಯಕತೆಯಿದ್ದು, ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಈ ಆಧ್ಯಾತ್ಮಿಕ ಜ್ಞಾನ ಅವಶ್ಯವಾಗಿದೆ, ಸೋಮವಾರಪೇಟೆಯ …

Read More »

ಮುದಗಲ್ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಿರ್ದೇಶಕ ಭೇಟಿ : ಅಧಿಕಾರಿಗಳ ನಿರ್ಲಕ್ಷ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸ್ಥಳೀಯ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಾಮ ನಿರ್ದೇಶನ  ನಿರ್ದೇಶಕ ನಾಗರಾಜ್ ಬಿರಾದಾರ್ ಭೇಟಿ ನೀಡಿದರು. ಕಾರ್ಯಾಲಯದಲ್ಲಿದ್ದ ಪುರಸಭೆ ಮುಖ್ಯಧಿಕಾರಿಗಳು ಅವರಿಗೆ ಸರಿಯಾದ ರೀತಿಯಲ್ಲಿ  ಸ್ಪಂದನೆ ನೀಡಲಿಲ್ಲ ಹಾಗೂ ಪುರಸಭೆ ಅಧಿಕಾರಿಗಳು ಕೊಳಗೇರಿ ಪ್ರದೇಶಗಳ ವೀಕ್ಷಣೆಗೆ ಯಾವುದೇ ಪೂರ್ವ ಸಿದ್ದತೆಗಳು ಮಾಡದಿರುವುದಿಲ್ಲ ನಾವು ಪಟ್ಟಣಕ್ಕೆ ಭೇಟಿ ಕೊಡುವ  ವಿಷಯವನ್ನ 2 ದಿನದ ಮುಂಚೆಯೇ ತಿಳಿಸಿದ್ದರು ಕೂಡ ಅಧಿಕಾರಿಗಳು ಸ್ಪಂದನೆ ನೀಡಿರುವುದಿಲ್ಲ ಎಂದು ಪುರಸಭೆ …

Read More »

ಮುದಗಲ್ : ಮೂರು ಮೇವಿನ ಬಣವೆಗಳು ಬೆಂಕಿಗೆ ಆಹುತಿ…

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಪಟ್ಟಣದ ಖಾಜಾಸಾಬ ಹಸನ್ ಸಾಬ  ಮೂಲಿಮನಿ ಎಂಬುವರ  ಜಮೀನಿನಲ್ಲಿ ಜಾನುವಾರುಗಳಿಗೆ  ಶೇಖರಿಸಿಟ್ಟಿದ್ದ ಮೇವಿನ ಬಣವಿಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಬಂಕಿಗೆ ಆಹುತಿಯಾಗಿದೆ. ಜಾನುವಾರುಗಳಿಗೆಂದು ಒಂದು ವರ್ಷದಿಂದ ಕೂಡಿ ಹಾಕಿದ್ದ ಮೂರು ಮೇವಿನ ಬಣವಿಗಳಿಗೆ ಆಕಸ್ಮಿಕವಾಗಿ ಬೆಂಕಿ  ತಗುಲಿ ಆಪಾರ ಪ್ರಮಾಣದ ಮೇವು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯಿಂದ  …

Read More »

ರಾಮಕೃಷ್ಣ – ವಿವೇಕಾನಂದ   ಆಶ್ರಮ ಉದ್ಘಾಟನೆ ಕಾರ್ಯಕ್ರಮ 

ವರದಿ : ನಾಗರಾಜ್ ಎಸ್ ಮಡಿವಾಳರ್ ಸಿಂಧನೂರು : ಪಟ್ಟಣದಲ್ಲಿ ರಾಮಕೃಷ್ಣ ಆಶ್ರಮ ದ ಶಾಖಾ ಆಶ್ರಮ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸದಾನಂದ ಮಹಾರಾಜ ಸ್ವಾಮೀಜಿ ಡಾ ಶರತ್ ಪ್ರಾಸ್ತಾವಿಕವಾಗಿ ಮಾತನಾಡಿ ಹೃದಯವಂತಿಕೆ ಗುಣಗಳನ್ನು ಬೆಳಸಿಕೊಳ್ಳಲು ಆಶ್ರಮ ಆಸರೆ ಆಗಲಿದೆ ಹಾಗೂ ಸ್ವಾಮೀಜಿಗಳ ಜೊತೆಗೆ ಕೈ ಜೋಡಿಸಿ ಎಂದರು. ನಂತರ ಬೀರಪ್ಪ  ಶಂಭೋಜಿ ಮಾತನಾಡಿ ರಾಮಕೃಷ್ಣ ಆಶ್ರಮ ವಿಶ್ವಕ್ಕೆ ಉತ್ತಮ ಶಿಕ್ಷಣ, ಸಂಕೃತಿ  ನೀಡುತ್ತಿದೆ. …

Read More »

ಸಾವಿತ್ರಿ ಬಾಯಿಪುಲೆ ಹೂಗಾರರ ಹೆಮ್ಮೆ : ಬಸವರಾಜ್    

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು  ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕು ಕಚೇರಿಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿ ಬಾಯಿ‌ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಶ್ರೀ ಮತಿ ಸಾವಿತ್ರಿ ಬಾಯಿ‌ಪುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದ  ಬಸವರಾಜ್ ಹೂಗಾರ್ ಮಹಿಳೆಯರ‌ ಶಿಕ್ಷಣಕ್ಕಾಗಿ ಮೊಟ್ಟ ಮೊದಲ ಬಾರಿಗೆ ಕ್ರಾಂತಿ ಮಾಡಿದ ಧೀರ ಮಹಿಳೆ ಶ್ರೀಮತಿ‌ ಸಾವಿತ್ರಿ ಬಾಯಿ ಪುಲೆ. ಇಂತಹ ಒಬ್ಬ ದಿಟ್ಟ ಮಹಿಳೆ …

Read More »
error: Content is protected !!